ಮಳೀ ಹಾಡು

ಬಣ್ಣದ ಗುಬ್ಬ್ಯಾರು ಮಳಿರಾಜಾ | ಅವರು |
ಮಣ್ಣಾಗಿ ಹೋದರು ಮಳಿರಾಜಾ ||
ಬಣ್ಣದ ಗುಬ್ಬ್ಯಾರು ಮಣ್ಣಾಗಿ ಹೋದರು
ಅನ್ಯದ ದಿನ ಬಂದು ಮಳಿರಾಜಾ ||೧||

ಒಕ್ಕಲಗೇರ್ಯಾಗ ಮಕಿರಾಜಾ | ಅವರು |
ಮಕ್ಕಳು ಮಾರ್ಯಾರ ಮಳಿರಾಜಾ ||
ಮಕ್ಕಳ ಮಾರೀಽ ರೊಕ್ಕಾ ಹಿಡಕೊಂಡು
ಭತ್ತಂಡಽ ತಿರಗ್ಯಾರ ಮಳಿರಾಜಾ ||೨||

ಸೊಲಗಿ ಹಿಟ್ಟಿನಾಗ ಮಳಿರಾಜಾ | ಅವರು |
ಸುಣ್ಣನ್ನು ಕೂಡಿಸ್ಯಾರ ಮಳಿರಾಜಾ ||
ಹಸ್ತು ಬಂದಕೇರಿ ಗಪಗಪ ತಿಂದು
ಒದ್ದಾಡಿ ಸತ್ತಾರ ಮಳಿರಾಜಾ ||೩||

ಗಿದ್ದನ ಆಕ್ಕ್ಯಾಗ ಮಳಿರಾಜಾ | ಅವರು |
ಅಪುವನ್ನು ಕೂಡ್ಯಾರ ಮಳಿರಾಜಾ ||
ಸಣ್ಣ ಕೂಸಿಗಿ ಮನ್ನಿಸಿ ಉಣಿಸ್ಯಾರ
ಕಣ್ಣನ್ನೆ ಮುಚ್ಚ್ಯಾವ ಮಳಿರಾಜಾ ||೪||

ಗಂಡುಳ್ಳ ಬಾಲ್ಯಾರು ಮಳಿರಾಜಾ | ಅವರು |
ಭಿಕ್ಷಾಕ ಹೊರಟಾರ ಮಳಿರಾಜಾ ||
ಗಂಡುಳ್ಳ ಬಾಲ್ಯಾರು ಭಿಕ್ಷಾಕ ಹೋದರು
ಅನ್ಯದ ದಿನ ಬಂದು ಮಳಿರಾಜಾ ||೫||

ಸ್ವಾತಿಽಯ ಮಳೆ ಬಂದು ಮಳಿರಾಜಾ | ಸುತ್ತ |
ದೇಶಾಕ ಆಗ್ಯಾದ ಮಳೆರಾಜಾ ||
ಹಳ್ಳ ಕೊಳ್ಳ ಹೆಣ ಹರಿದಾಡಿ ಹೋದವು
ಯಾವಾಗ ಬಂದೆಪ್ಪಾ ಮಳಿರಾಜಾ ||೬||
*****

ಬಿತ್ತಿಗೆಯ ಕಾಲದಲ್ಲಿ ಮಳೆಯು ಬರುವುದಕ್ಕೆ ಬಹೆಳ ತಡವಾಗಹತ್ತಿದರೆ ಒಕ್ಕಲಿಗರಲ್ಲಿ ಹಾಹಾಕಾರವೇ ಎದ್ದು ಹೋಗುತ್ತಿದೆ. ಪೂರ್ವಾ ಉತ್ತರಾ ಮಳೆಗಳು ಆಗಲೇಬೇಕು. ಅವು ತಪ್ಪಿದರೆ ರಂಬಾಟಕ್ಕೆ ಆರಂಭವೇ. ಹೀಗಿದ್ದು ಯಾವುದೊ ಒಂದು ವರುಷ ಸ್ವಾತಿಯ ಮಳೆಯ ವರೆಗೆ ಒಂದು ಹನಿ ಕೂಡ ಬೀಳೆಲಿಲ್ಲವಂತೆ. ಹೀಗೆ ಆದಾಗಲೆಲ್ಲ ಎಲ್ಲೆಲ್ಲಿಯೂ ಬರದ ಲಕ್ಷಣಗಳೇ ತೋರುತ್ತವೆ. ಇಂತಹೆ ಪ್ರಸಂಗದ ಒಂದು ಕರುಣಾಜನಕ ಚಿತ್ರವು ಈ ಹಾಡಿನಲ್ಲಿದೆ.

ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.

ಶಬ್ದ ಪ್ರಯೋಗಗಳು:- ಗುಬ್ಬ್ಯಾರು=ಘೋಷಾ ಪದ್ದತಿಯ ಹೆಣ್ಣು ಮಕ್ಕಳು (ಗುಬ್ಬಿಯಂತೆ ಯಾವಾಗಲೂ ಮನೆಯಲ್ಲಿಯೆ ಇರುವವರು.) ಅನ್ಯಾದ=ಅನ್ಯಾಯದ. ಬಂದಕೇರಿ=ಬಂದುಬಿಟ್ಟು. ಉಣಿಸ್ಯಾರ=ಉಣಿಸಿದರು. ಮುಚ್ಚ್ಯಾವ=ಮುಚ್ಚಿದವು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನೇ ಇರುವೆ ನನ್ನ ಪರವಾಗಿ
Next post ಲಿಂಬೆ ಹಣ್ಣಿನ ಸಿಪ್ಪಿಯಲ್ಲಿ ಪೌಷ್ಠಿಕವಾದ ತಂಬುಳಿ ತಯಾರಿಕೆ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys